ಟಿಎಂಸಿಯ ಎಕ್ಕ ಈಗ ಪಶ್ಚಿಮ ಬಂಗಾಳ ಬಿಜೆಪಿಯ ರಾಜ

ಬಿಜೆಪಿ ಪಶ್ಚಿಮ ಬಂಗಾಳದಲ್ಲಿ ಮೊದಲ ಬಾರಿಗೆ ಅಧಿಕಾರ ಹಿಡಿದಿದೆ.‌ ಬಿಜೆಪಿ ಗೆಲುವಿನಲ್ಲಿ ಪಕ್ಷದ ರಣತಂತ್ರ,
ಟಿಎಂಸಿ ವಿರುದ್ಧ ಹೋರಾಟ, ಆರ್‌ ಎಸ್ ಎಸ್ ಸಂಘಟನೆ, ಹಿಂದುತ್ವ ಏನೇ ಕಾರಣಗಳಿರಬಹುದು
ಈಗ ಮುಖ್ಯಮಂತ್ರಿಯಾಗಿರುವ ಸುವೇಂದು ಅಧಿಕಾರಿ ಪಾತ್ರ ಕೂಡ ಅಷ್ಟೇ ಪ್ರಮುಖವಾಗಿದೆ.

ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್ ನಲ್ಲಿ ಪ್ರಮುಖ ಹಾಗೂ ಪ್ರಬಲ  ನಾಯಕರಾಗಿದ್ದ ಸುವೇಂದು ಅಧಿಕಾರಿ ಅವರನ್ನು ಬಿಜೆಪಿ 2020 ರಲ್ಲಿ ಪಕ್ಷಕ್ಕೆ ಸೆಳೆದು ಮಮತಾ ಬ್ಯಾನರ್ಜಿಗೆ ಚೆಕ್ ನೀಡಿತ್ತು. ಅದಕ್ಕೂ ಮುನ್ನ ಬಿಜೆಪಿ, ತೃಣಮೂಲ ಕಾಂಗ್ರೆಸ್ ನ ಅನೇಕ ನಾಯಕರನ್ನು ಪಕ್ಷಕ್ಕೆ ಸೆಳೆದಿದ್ದರೂ ಅವರು ಬಿಜೆಪಿ ನಿರೀಕ್ಷೆ ಸಾಬೀತುಪಡಿಸಿರಲಿಲ್ಲ. ಆದರೆ, ಸುವೇಂದು ಅಧಿಕಾರಿ ಪ್ರಾಬಲ್ಯ 2021 ರ ವಿಧಾನಸಭಾ ಚುನಾವಣೆಯಲ್ಲೇ ಸಾಬೀತಾಗಿತ್ತು.

ನಂದಿಗ್ರಾಮ ಕ್ಷೇತ್ರದಲ್ಲಿ ಕಣಕ್ಕಿಳಿದಿದ್ದ ಮಮತಾ ಬ್ಯಾನರ್ಜಿಯನ್ನು ಸೋಲಿಸುವ ಮೂಲಕ ಬಿಜೆಪಿಯಲ್ಲಿ ಅಧಿಕಾರದ ಭರವಸೆ ಮೂಡಿಸಿದ್ದರು. ಇದೀಗ ಭವಾನಿಪುರದಲ್ಲೂ ಮಮತಾ‌ ಬ್ಯಾನರ್ಜಿಯನ್ನು ಸೋಲಿಸುವ ಮೂಲಕ ಸುವೇಂದು ಅಧಿಕಾರಿ ಪಶ್ಚಿಮ ಬಂಗಾಳದಲ್ಲಿ ತಮ್ಮ ಪ್ರಾಬಲ್ಯ ಏನೆಂಬುದನ್ನು ಸಾಬೀತುಪಡಿಸಿದ್ದಾರೆ.ಬಭವಾನಿಪುರದೊಂದಿಗೆ ಇಡೀ ಬಂಗಾಳದಲ್ಲಿ  ತೃಣಮೂಲ ಕಾಂಗ್ರೆಸ್ ಗೆ ಸುವೇಂದು ಅಧಿಕಾರಿ ಸೋಲಿನ ರುಚಿ ತೋರಿಸಿದ್ದಾರೆ.

ಇನ್ನು ಸುವೇಂದು ಅಧಿಕಾರಿ ಸಂಪುಟದಲ್ಲಿ ಮಂತ್ರಿಯಾಗಿರುವ ನಿಶಿತ್ ಪ್ರಾಮಾಣಿಕ್ ಕೂಡ ಟಿಎಂಸಿಯಲ್ಲಿದ್ದವರು. ಕೇಂದ್ರ ಸರ್ಕಾರದಲ್ಲಿ ಗೃಹ ಹಾಗೂ ಯುವ ಸಬಲೀಕರಣ ಕ್ರೀಡಾ ಇಲಾಖೆ ರಾಜ್ಯ ಸಚಿವರಾಗಿದ್ದ ಇವರು 2019 ರಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದರು.