ಸಂಪಾಯಿತಲೇ ಪರಾಕ್

ಹೂವಿಹಡಗಲಿ (ವಿಜಯನಗರ): ತಾಲೂಕಿನ ಮೈಲಾರದಲ್ಲಿ ಗುರುವಾರ ಮೈಲಾರಲಿಂಗೇಶ್ವರ ಕಾರ್ಣಿಕೋತ್ಸವ ನಡೆಯಿತು. ಗೊರವಪ್ಪ ಬಿಲ್ಲನ್ನೇರಿ ಸದ್ದಲೇ ಎಂದು ಕೂಗಿದ ಕೂಡಲೇ ಡೆಂಕನಮರಡಿಯಲ್ಲಿ ನೆರೆದಿದ್ದ ಲಕ್ಷಾಂತರ ಜನರು ಮೌನಕ್ಕೆ ಶರಣಾದರು. ಆಗ ಗೊರವಪ್ಪ ‘ಸಂಪಾಯಿತಲೇ ಪರಾಕ್’ ಎಂದು ಕಾರಣಿಕ ನುಡಿಯುತ್ತಿದ್ದಂತೆ ಜನರು ಕೇಕೆ ಹಾಕಿ ಸಂಭ್ರಮಿಸಿದರು.  ಸಂಪಾಯಿತಲೇ ಪರಾಕ್ ಎಂಬ ಕಾರ್ಣಿಕವನ್ನು ಈ ಬಾರಿ ಮಳೆ-ಬೆಳೆ ಸಮೃದ್ಧವಾಗಲಿದೆ ಎಂದು ವಿಶ್ಲೇಷಿಸಲಾಯಿತು. ಸತತ ಮೂರನೇ ವರ್ಷ ಗೊರವಪ್ಪ ಸಂಪಾಯಿತಲೇ ಕಾರಣಿಕ ನುಡಿಯುತ್ತಿರುವುದು ವಿಶೇಷ.